ಓಂ ಶ್ರೀ ಗುರುಭ್ಯೋ ನಮಃ 

|| ಮಂಗಳಂ ||


ಮಂಗಳಂ ಜಯ ಮಂಗಳಂ

ಮಂಗಳಂ ಶುಭ ಮಂಗಳಂ ||

  ||ಪ ||

ಚಲಿಸುವ ಜಲದಲಿ ಮತ್ಸ್ಯನಿಗೆ

ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ

ಧರೆಯನುದ್ಧರಿಸಿದ ವರಹಾವತಾರಗೆ

ತರಳನ ಕಾಯ್ದ ಮುದ್ದು ನರಸಿಂಹಗೆ

 || ಮಂಗಳಂ ||

ಭೂಮಿಯ ದಾನವ ಬೇಡಿದಗೆ

ಆ ಮಹಾಕ್ಷತ್ರಿಯರ ಗೆಲಿದವಗೆ

ರಾಮ ಚಂದಿರನೆಂಬ ದಶರಥ ಸುತನಿಗೆ

ಸತ್ಯಭಾಮೆಯರರಸ ಗೋಪಾಲಕೃಷ್ಣಗೆ

   || ಮಂಗಳಂ ||

ಬೆತ್ತಲೆ ನಿಂತಿಹ ಬೌದ್ಧನಿಗೆ

ಉತ್ತಮ ಹಯವೇರಿದ ಕಲ್ಕ್ಯನಿಗೆ

ಹತ್ತವತಾರದಿ ಭಕ್ತರ ಸಲಹುವ

ಕರ್ತೃ ಶ್ರೀ ಪುರಂದರ ವಿಠ್ಠಲನಿಗೆ

|| ಮಂಗಳಂ ||

 ***





ಕಾಯೇನವಾಚ ಮನಸೇಂದ್ರಿಯ್ಯೆರ್ವಾ |

ಬುದ್ಧಿಯಾತ್ಮ ನಾ ವಾ ಪ್ರಕೃತೇ ಸ್ವಭಾವಾತ್ |

ಕರೋಮಿ ಯದ್ಯತ್ ಸಕಲಂ ಪರಸ್ಮ್ಯೆ ||

ನಾರಾಯಣಾಯೇತಿ ಸಮರ್ಪಯಾಮಿ |

ನಾರಾಯಣಾಯೇತಿ ಸಮರ್ಪಯಾಮಿ |

ನಾರಾಯಣಾಯೇತಿ ಸಮರ್ಪಯಾಮಿ |