ವಂದೇ ಶಂಭು ಉಮಾಪತಿಂ ಸುರಗುರುಂ

ವಂದೇ ಜಗತ್ ಕಾರಣಂ

ವಂದೇ ಪನ್ನಗ ಭೂಷಣಂ ಮೃಗಧರಂ

ವಂದೇ ಪಶುನಾಂ ಪತಿಂ

ವಂದೇ ಸೂರ್ಯ ಶಶಾಂಕ ವಹ್ನಿ ನಯನಂ

ವಂದೇ ಮುಕುಂದಪ್ರಿಯಂ

ವಂದೇ ಭಕ್ತ ಜನಾಶ್ರಯಂಚ ವರದಂ

ವಂದೇ ಶಿವಂ ಶಂಕರಂ ||



ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ 

ಮಹಾಮಹಿಮ ಮಂಜುನಾಥ ನಮೋ ಎನ್ನುವೆ  |

ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ   

ನೇತ್ರಾವತಿ ನದಿಯಿದುವೆ ಆ ಸುರನದಿ   ||

|| ||

ಧರ್ಮಪಾಲ ದಯಾಶೀಲ ಮಂಜುನಾಥನೆ   

ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ   |

ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೆ   

ನೇಮದಿಂದ ನಮಿಸುವೆವು ಹೆಜ್ಜೆಹೆಜ್ಜೆಗೆ   |

||ನ್ಯಾಯ ನೀತಿ ಮೂರ್ತಿವೆತ್ತ||

ಅಣ್ಣಪ್ಪ ಗುರುವೆ ನಿನಗೆ ಶರಣು ಎನ್ನುವೆ   

ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲ್ಲುವೆ   |

ನ್ಯಾಯ ಮಾರ್ಗದಲ್ಲಿ ನಡೆದು ಧನ್ಯನಾಗುವೆ   

ಧರ್ಮ ನನ್ನ ಕಾಯಲೆಂದು ಸದಾ ಬೇಡುವೆ   |

||ನ್ಯಾಯ ನೀತಿ ಮೂರ್ತಿವೆತ್ತ||

ಧರ್ಮವನ್ನು ರಕ್ಷಿಸುವ ಶಕ್ತಿ ನೀಡು    

ನಿನ್ನ ನಂಬಿ ಬಾಳುವ ಭಕ್ತಿ ನೀಡು   |

ಸತ್ಯವೆ ಗೆಲ್ಲುವ ನ್ಯಾಯ ನೀಡು   

ನನ್ನ ಮನದ ಗುಡಿಯಲ್ಲಿ ವಾಸ ಮಾಡು   |

||ನ್ಯಾಯ ನೀತಿ ಮೂರ್ತಿವೆತ್ತ||