ವಂದೇ ಶಂಭು ಉಮಾಪತಿಂ ಸುರಗುರುಂ
ವಂದೇ ಜಗತ್ ಕಾರಣಂ
ವಂದೇ ಪನ್ನಗ ಭೂಷಣಂ ಮೃಗಧರಂ
ವಂದೇ ಪಶುನಾಂ ಪತಿಂ
ವಂದೇ ಸೂರ್ಯ ಶಶಾಂಕ ವಹ್ನಿ ನಯನಂ
ವಂದೇ ಮುಕುಂದಪ್ರಿಯಂ
ವಂದೇ ಭಕ್ತ ಜನಾಶ್ರಯಂಚ ವರದಂ
ವಂದೇ ಶಿವಂ ಶಂಕರಂ ||
ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನ್ನುವೆ |
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿಯಿದುವೆ ಆ ಸುರನದಿ ||
|| ಪ ||
ಧರ್ಮಪಾಲ ದಯಾಶೀಲ ಮಂಜುನಾಥನೆ
ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ |
ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೆ
ನೇಮದಿಂದ ನಮಿಸುವೆವು ಹೆಜ್ಜೆಹೆಜ್ಜೆಗೆ |
||ನ್ಯಾಯ ನೀತಿ ಮೂರ್ತಿವೆತ್ತ||
ಅಣ್ಣಪ್ಪ ಗುರುವೆ ನಿನಗೆ ಶರಣು ಎನ್ನುವೆ
ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲ್ಲುವೆ |
ನ್ಯಾಯ ಮಾರ್ಗದಲ್ಲಿ ನಡೆದು ಧನ್ಯನಾಗುವೆ
ಧರ್ಮ ನನ್ನ ಕಾಯಲೆಂದು ಸದಾ ಬೇಡುವೆ |
||ನ್ಯಾಯ ನೀತಿ ಮೂರ್ತಿವೆತ್ತ||
ಧರ್ಮವನ್ನು ರಕ್ಷಿಸುವ ಶಕ್ತಿ ನೀಡು
ನಿನ್ನ ನಂಬಿ ಬಾಳುವ ಭಕ್ತಿ ನೀಡು |
ಸತ್ಯವೆ ಗೆಲ್ಲುವ ನ್ಯಾಯ ನೀಡು
ನನ್ನ ಮನದ ಗುಡಿಯಲ್ಲಿ ವಾಸ ಮಾಡು |
||ನ್ಯಾಯ ನೀತಿ ಮೂರ್ತಿವೆತ್ತ||