ಸ್ವಾಮಿಯೇ ಶರಣು ಅಯ್ಯಪ್ಪ..

ಅಯ್ಯನೇ ಶರಣು ಅಯ್ಯಪ್ಪ....

ಮಾಲೆಯ ಕೊರಳಲಿಟ್ಟು..

ವೃತ ನಿಯಮದ ಮುಡಿಯುಟ್ಟು..

ಗಿರಿ ಕಂದರವ ದಾಟಿದೆವು..

ಅಯ್ಯನ ಕಾಣಲು ||  ಸ್ವಾಮಿಯೆ |

ಹೊಸಮಲೆ ಹೊನ್ನುಮಲೆ ಪುಣ್ಯಮಲೆ ಶಬರಿಮಲೆ |

ಮಣಿಕಂಠನಿರುವ ಮಲೆ

ಭಕ್ತರು ಶತಕೋಟಿ ಬರುವಾಗ

ಮುಕ್ತಿಯ ಪಥತೋರಿ ಶರಣು ಎನ್ನುವ ಮಲೆ

ಸ್ವಾಮಿ ಶರಣು ಎನ್ನುವ ಮಲೆ ||

ನನ್ನಯ್ಯ ಜಗದಯ್ಯ ನನ್ನಯ್ಯ ಅಯ್ಯಪ್ಪನೇ |

ಶರಣು ಶರಣು ಶರಣು ಶರಣು ಸ್ವಾಮಿಯೆ ||   

||ಹೊಸಮಲೆ ||

ಜಗದೀಶನಾ ಮಗನೇ  ಕಲಿಕಾಲ ಕಂಡವನೇ 

ಪಂಪಾನದಿ ತೀರದಿ ಜನಿಸಿದ ಅಯ್ಯನಯ್ಯನೇ  ||

ಹರಿಹರ ನಂದನನೇ 

ಭುವಿಗೆ ನೀ ಬಂದವನೇ 

ಹೊಸ ಯುಗವ ನೀನು ತಂದೆಯಲ್ಲೋ ||

||ನನ್ನಯ್ಯ ಜಗದಯ್ಯ||

ಧನಸ್ಸಿನ ವೀರನಾಗಿ  ವೀರಮಣಿಕಂಠನಾಗಿ 

ಹುಲಿವಾಹನನಾಗಿ 

ಸ್ವಾಮಿ ಮಹಿಷಿಮರ್ಧನನಾಗಿ ||

ಏಳುಮಲೆ ಏರಿದೆಯ   ಶಬರಿಮಲೆ ಸೇರಿದೆಯ 

ಭಕ್ತರ ಮನದಲ್ಲಿ ನೆಲೆಸಿದೆಯ||

|| ನನ್ನಯ್ಯ ಜಗದಯ್ಯ ||

ಬಲು ಕಟ್ಟುನಿಟ್ಟಾಗಿ ಬಂದೆವು 

ಕರಿಮಲೆ ನೀಲಿಮಲೆ ಏರುತ್ತ ಬಂದೆವು 

ಹದಿನೆಂಟು ಹಂತಗಳ ಹತ್ತುತ್ತಾ ಬಂದೆವು 

ಶರಣೆಂದು ಹೇಳಿ ಹಾಡುತ ಬಂದೆವು ||

ಮೋಕ್ಷ ಕೊಡು ಮುಕ್ತಿ ಕೊಡು 

ಸ್ಮರಿಸುವ ಶಕ್ತಿ ಕೊಡು  

ಸ್ವಾಮಿ ಭಕ್ತರಿಗೆ ಅಭಯ ನೀಡು ||

|| ನನ್ನಯ್ಯ ಜಗದಯ್ಯ ||

***