ಕದ್ರಿಯಿಂದ ಬಂದವನು ಮಂಜುನಾಥನು |

ಧರ್ಮಸ್ಥಳ ಕ್ಷೇತ್ರದಲ್ಲಿ ಅನ್ನದಾತನು | ಇವನು ಅನ್ನದಾತನು

||ಪ||

ಧರ್ಮದ ರಕ್ಷಣೆ ಮಾಡುತ ನಿಂತನು ಅಣ್ಣಪ್ಪನು |

ಕ್ಷೇತ್ರದ ವೈಭವ ನೋಡುತ ನಿಂತನು ಗೊಮ್ಮಟೇಶನು||

||ಕದ್ರಿಯಿಂದ ||

ಪರಶುರಾಮ ಕ್ಷೇತ್ರದಲ್ಲಿ ಮಾತ್ರವಲ್ಲದೇ |

ಈ ಪರಶಿವನು ಮೆರೆದಿಹನು ಸರ್ವ ಕ್ಷೇತ್ರದಿ ||

ಮಾತನು ಬಿಡನು ಶ್ರೀ ಮಂಜುನಾಥನು |

ಹರಕೆ ಹೊತ್ತು ಸೇವೆ ಮಾಡಿ ಮಹಾಮಹಿಮನ ||

|| ಧರ್ಮದ ರಕ್ಷಣೆ ||

ಆಣೆಮಾತು ‌ಪರಿಹಾರ ಮಾತ್ರವಲ್ಲದೇ |

ಹೆಗ್ಗಡೆಯ ಮಾತಿನಲ್ಲಿ ದಿವ್ಯಶಕ್ತಿಯು ||

ಅನ್ನ ನೀಡಿದಾ ವಸ್ತ್ರ ಕೊಡಿಸಿದ |

ವಿದ್ಯೆಯನು ಕರುಣಿಸುತ ಬುದ್ದಿ ನೀಡಿದ ||

|| ಧರ್ಮದ ರಕ್ಷಣೆ ||

***