ದಾಸನ ಮಾಡಿಕೊ ಎನ್ನ ಸ್ವಾಮಿ |
ಸಾಸಿರನಾಮದ ವೆಂಕಟರಮಣ||
||ದಾಸನ ಮಾಡಿಕೊ||
ದುರುಬುದ್ಧಿಗಳನೆಲ್ಲ ಬಿಡಿಸೋ |
ನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ ||
ಚರಣ ಸೇವೆ ಎನಗೆ ಕೊಡಿಸೋ | ಅಭಯ
ಕರಪುಷ್ಪವಾ ಎನ್ನ ಶಿರದಲಿ ಮುಡಿಸೋ ||
||ದಾಸನ ಮಾಡಿಕೊ||
ದೃಢಭಕ್ತಿ ನಿನ್ನಲಿ ಬೇಡಿ | ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ|
ಕಡೆಗಣ್ಣಲೇಕೆನ್ನನೋಡಿ | ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ||
||ದಾಸನ ಮಾಡಿಕೊ||
ಮೊರೆಹೊಕ್ಕವರ ಕಾವ ಬಿರುದು | ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು ||
ದುರಿತಗಳೆಲ್ಲವ ತರಿದು | ಸಿರಿ
ಪುರಂದರ ವಿಠಲ ಎನ್ನನು ಪೊರೆದು||
||ದಾಸನ ಮಾಡಿಕೊ||
***