ದಾಸನ ಮಾಡಿಕೊ ಎನ್ನ ಸ್ವಾಮಿ |

ಸಾಸಿರನಾಮದ ವೆಂಕಟರಮಣ||

||ದಾಸನ ಮಾಡಿಕೊ||

ದುರುಬುದ್ಧಿಗಳನೆಲ್ಲ ಬಿಡಿಸೋ |

ನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ ||

ಚರಣ ಸೇವೆ ಎನಗೆ ಕೊಡಿಸೋ | ಅಭಯ

ಕರಪುಷ್ಪವಾ ಎನ್ನ ಶಿರದಲಿ ಮುಡಿಸೋ ||

||ದಾಸನ ಮಾಡಿಕೊ||

ದೃಢಭಕ್ತಿ ನಿನ್ನಲಿ ಬೇಡಿ | ನಾ

ಅಡಿಗೆರಗುವೆನಯ್ಯ ಅನುದಿನ ಪಾಡಿ|

ಕಡೆಗಣ್ಣಲೇಕೆನ್ನನೋಡಿ | ಬಿಡುವೆ

ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ||

||ದಾಸನ ಮಾಡಿಕೊ||

ಮೊರೆಹೊಕ್ಕವರ ಕಾವ ಬಿರುದು | ಎನ್ನ

ಮರೆಯದೆ ರಕ್ಷಣೆ ಮಾಡಯ್ಯ ಪೊರೆದು ||

ದುರಿತಗಳೆಲ್ಲವ ತರಿದು | ಸಿರಿ

ಪುರಂದರ ವಿಠಲ ಎನ್ನನು ಪೊರೆದು||

||ದಾಸನ ಮಾಡಿಕೊ||

***